ನಳನ ವಿಷಯ ಬಂದಾಗ ನನಿಗೆ ಮತ್ತೆ ನನ್ನ ಅಜ್ಜನ ನೆನಪ್ಪಾಗ್ತೆ..... ನಾನು ಸಣ್ಣಾಗಿರುವಾಗ ಪ್ರತಿ ದಿನ ಅಜ್ಜ ನನಿಗೆ ಕಥೆ ಹೇಳ್ತಾ ಇತ್ತಿದ್ರು.... ರಾಮಾಯಣ, ಮಹಾಭಾರತದ ಕತೆಗಳೇ ಜಾಸ್ತಿ..... ನಳನ ಕತೆಯನ್ನೂ ಹೇಳಿತ್ತಿದ್ರು ಅಜ್ಜ..... ಅಜ್ಜನ ಕಥೆ ಹೇಳುವ ರೀತಿಯೇ ಚಂದ :) ಮುಖ್ಯ ಕತೆಯೊಟ್ಟಿಗೆ ಬರುವ ಉಪಕತೆ, ಪಾತ್ರ ವರ್ಣನೆ, ಪ್ರತಿಯೊಂದು ಪಾತ್ರವೂ ಕಣ್ಣಿಗೆ ಕಟ್ಟುವ ಹಾಂಗೆ ಕತೆ ಹೇಳ್ತಿದ್ದದ್ದು ಹೆಂಗೆ ಮರಿಯುಕೆ ಸಾಧ್ಯ ? ರಾಮಾಯಣ ಅಥವಾ ಮಹಾಭಾರತ ಕತೆ ಶುರುವಾಯ್ತು ಹೇಳಿರೆ ಸಾಕು, ತಿಂಗಳಾನುಗಟ್ಟಲೆ ನನಿಗೆ ಅದೆ ಗುಂಗು :) ಅಜ್ಜ ಹೋದಲ್ಲಿ ಬಂದಲ್ಲಿ ಎಲ್ಲಾ "ಕತೆ ಹೇಳಿ ಅಜ್ಜಾ" ಹೇಳಿ ಅಜ್ಜನ ಬೆನ್ನ ಹಿಂದೆಯೇ ಇರ್ತಿದ್ದೆ :) ಅಜ್ಜ ಚಿಟ್ಟೆಲಿ ಕೂತು ಅಡಿಕ್ಕೆ ಸಜ್ಜಿ ಮಾಡುವಾಗ ನಾನೂ ಅಲ್ಲಿಯೇ ಕೂತುಕೊಂಡು ಕತೆ ಕೇಳುದು :) ಅಡಿಕ್ಕೆ ರಾಶಿಗೆ ಕೈ, ಕಾಲು ಹಾಕಿ ಆಟ ಆಡುದು, "ನಾನೂ ಅಡಿಕ್ಕೆ ಸಜ್ಜಿ ಮಾಡ್ತೇನೆ" ಹೇಳಿ ಅಜ್ಜನ ಹತ್ರ ಹಠ ಮಾಡುದು, ಎಲ್ಲವೂ ನೆನಪಾಗ್ತಾ ಅದೆ :)
ಅದೆಲ್ಲವೂ ಈಗ ಮುಗುದು ಹೋದ ಮಾತು :( ರಥಂದ ಹಾರಿ ಹೋದ ಋತುಪರ್ಣನ ಶಾಲಿನ ಹಾಂಗೆ.... ಮತ್ತೆಂದೂ ಸಿಕ್ಕದ್ದೇ ಇರುವಂಥದ್ದು :( ಬಾಲ್ಯದ ಆ ಖುಷಿಯ ದಿನಗಳಂದ ಬಹು ಯೋಜನ ದೂರ ಬಂದು ಬಿಟ್ಟಿದ್ದೇನೆ :( ಮನೆ ಬಿಟ್ಟು ಈ ಮಹಾನಗರಲ್ಲಿ ಬಂದು ಕೂತ ಮೇಲಂತೂ, ಎತ್ತ ಹೋಗ್ತಾ ಇದ್ದೇನೆ, ಯಾವ ವೇಗಲ್ಲಿ ಕಳೆದು ಹೋಗ್ತಾ ಇದ್ದೇನೆ ಹೇಳಿಯೇ ಗೊತ್ತಾಗ್ತಾ ಇಲ್ಲ :( "ಪರಿವರ್ತನೆ ಜಗದ ನಿಯಮ" ಹೇಳುವ ಮಾತು ಹೇಳಿಕೊಂಡು ಸಮಾಧಾನ ಮಾಡಿಕೊಳ್ವೇಕು, ಅಷ್ಟೇ :(
ಪಿಯುಸಿ ಮುಗುಸಿ CET ಬರ್ದು ಆದ ಮೇಲೆ "ಮುಂದೆಂತ ?" ಹೇಳುವ ಪ್ರಶ್ನೆ ಎದುರಾದಾಗ ನನ್ನ ಆಯ್ಕೆ Horticulture ಆಯ್ತು.... ವೆಟೆರಿನೆರಿ ಮಾಡ್ವೆಕು ಹೇಳಿ ಆಸೆ ಇದ್ರೂ ಸೀಟ್ ಸಿಕ್ಕುವಷ್ಟು ಮಾರ್ಕು ಇರಲ್ಲ :( ಸರಿ, ಬಿ.ಎಸ್ಸಿ. ತೋಟಗಾರಿಕೆ ಕೋರ್ಸ್ ತೆಕ್ಕೊಂಡು ಮೂಡಿಗೆರೆ ಕಾಲೇಜ್ ಸೆಲೆಕ್ಟ್ ಮಾಡಿಯೂ ಆಯ್ತು.... ಪಿಯುಸಿಲಿ ಎರಡು ವರ್ಷ ಹಾಸ್ಟೆಲ್ ಲಿ ಇದ್ದು ಅಭ್ಯಾಸ ಆಗಿದ್ದ ಕಾರಣ ಮನೆ ಬಿಟ್ಟು ಒಬ್ಬನೇ ಇರುಕೆ ಹೆದ್ರಿಕೆ ಅಂತೂ ಇರಲ್ಲ.... ಆದ್ರೂ ಘಟ್ಟದ ಮೇಲೆ, ಹೆಂಗೋ ಏನೋ ? ಊಟ ತಿಂಡಿ ಸರಿ ಅಡ್ಜಸ್ಟ್ ಆಗದ್ರೆ ಹೇಂಗೆ ಹೇಳುವ ಸಣ್ಣ ಆತಂಕ ನನಿಗೂ, ಮನೆಯವಕ್ಕೂ ಇದ್ದೆ ಇತ್ತು.... ಆದ್ರೆ ಬಿ.ಎಸ್ಸಿ. ಮುಗುಸಿ ಹೊರಡುವಾಗ ಮೂಡಿಗೆರೆ ಬಿಟ್ಟು ಬರುಕೆ ಮನಸ್ಸೇ ಇರಲ್ಲ :( ಕಣ್ಣೀರು ಹಾಕಿ ಹೊರಟವು ಎಷ್ಟು ಜನವೋ ? ನಾನಂತೂ ಕರ್ಚೀಪು ಚೆಂಡಿ ಮಾಡಿತ್ತಿದ್ದೆ :(
ಡಿಗ್ರಿ ಮುಗುಸಿ ನಾಲ್ಕು ಐದು ವರ್ಷ ಕಳುದು ಮತ್ತೆ ನಾವು ಕಲ್ತ ಕಾಲೇಜಿಗೆ, ಆ ಊರಿಗೆ ಹೋಗುವ ಖುಷಿ ಅದೆ ಅಲ್ಲಾ ? ಅದ್ರ ಅಕ್ಷರಕ್ಕೆ ಇಳುಶುದು ಕಷ್ಟ ಸಾಧ್ಯ.... ಅದ್ರ ಅನುಭವಿಸಿಯೇ ತಿಳ್ಕೊಳ್ವೆಕಷ್ಟೇ.... ಅದೇ excitement ಲಿ ಬೆಳಿಗ್ಗೆ ಎದ್ದು ಹಾಸ್ಟೆಲ್ ಇಂದ ಸೀದಾ ಕಾಲೇಜ್ ಇಗೆ ಹೋದೆ.... ತುಂಬಾ ಬದಲಾವಣೆ ಎಂತ ಆಗಿರಲ್ಲ :) ಒಂದೊಂದು ಕ್ಲಾಸ್ ರೂಮಿಗೂ ಹೋಗಿ ಫೋಟೋ ತೆಕ್ಕೊಂಡೆ :) ಕೈಲಿ ಇದ್ದ ಕ್ಯಾಮೆರಾ 14 ಮೆಗಾ ಪಿಕ್ಸೆಲ್, 4 ಜಿಬಿ ಮೆಮೊರಿ :) ಆದ್ರೆ ನಾಕು ವರ್ಷ ನಾನು ಅಲ್ಲಿ ಓಡಾಡಿ ಅನುಭವಿಸಿದ ಕ್ಷಣಂಗಳ ಸೆರೆ ಹಿಡುದ್ದು ಸಾವಿರಾರು ಮೆಗಾ ಪಿಕ್ಸೆಲ್ ನ ನನ್ನ ಕಣ್ಣು ಮತ್ತೆ unlimited ಜಿಬಿ ಮೆಮೊರಿ ಇರುವ ಮೆದುಳು :) ಪಿರಿಪಿರಿ ಮಳೆಯ ಮಧ್ಯೆಯೇ ಕೊಡೆ ಹಿಡ್ಕೊಂಡು ಕಾಲೇಜ್ ಸುತ್ತ ಒಂದು ಸುತ್ತು ಹಾಕಿದೆ....
ಅದೇ ಮೊದಲು, ಅದೇ ಕೊನೆ ನಾವು ತೇಜಸ್ವಿ ಮನೆಗೆ ಹೋದ್ದು..... ಮತ್ತೆ ಅವಾಗ ಇವಾಗ ಮೂಡಿಗೆರೆಲಿಯೋ, ಹ್ಯಾಂಡ್ ಪೋಸ್ಟಿಲಿಯೋ ಹಿಂದಾಣ ಸೀಟ್ ಇಲ್ಲದ್ದ ಹಳೇ ಲ್ಯಾಂಬಿ ಸ್ಕೂಟರಿಲಿ ತಿರಿಗಿಕೊಂಡಿದ್ದ ತೇಜಸ್ವಿಯ ದೂರಂದ ನೋಡಿ ಖುಷಿ ಪಟ್ಟದ್ದೆ ಹೆಚ್ಚು :)
ಮತ್ತೆ ರಾಜಣ್ಣನ ಕ್ಯಾಂಟೀನ್ಲಿ ತಿಂಡಿ ಕಾಪಿ ಮಾಡಿ, ಹ್ಯಾಂಡ್ ಪೋಸ್ಟ್ ವರೆಗೆ ರಿಕ್ಷ ಹತ್ತಿ ಹೋದ್ರೆ ಅಲ್ಲಿ ಸಿಕ್ಕಿದ್ದು ಆಟೋ ಗಣೇಶಣ್ಣ. ಅದೇ ನೆಗೆ, ರಿಕ್ಷಾ, ಹಳೇ ನೋಕಿಯಾ ಹ್ಯಾಂಡ್ ಸೆಟ್, ಉಹುಂ ಚೇಂಜ್ ಆಗಲೇ ಇಲ್ಲ :)
ಮಲಯ ಮಾರುತ ಗೆಸ್ಟ್ ಹೌಸ್ ಕಳುದು ಮುಂದೆ ಹೋದ್ರೆ ಜೇನುಕಲ್ಲು ಅಣ್ಣಪ್ಪ ಸ್ವಾಮಿ ದೇವಸ್ಥಾನ.... ಘಾಟಿಲಿ ಹೋಗುವ ಎಲ್ಲಾ ವಾಹನಗಳೂ ಅಲ್ಲಿ ನಿಲ್ಲಿಸಿ ಪೂಜೆ ಮಾಡಿಯೇ ಮುಂದೆ ಹೋಗುದು :) ಬಸ್ ನಿಲ್ಸಿದ ಕೂಡ್ಲೇ ನಾವು ಮೂರೂ ಜನ ಇಳುದ್ವು.... ಪಿರಿಪಿರಿ ಮಳೆ ಸ್ವಲ್ಪ ಸ್ವಲ್ಪವೇ ಜೋರಾವುಕೆ ಶುರು ಆಯ್ತು.... ಬಸ್ ಹೊರಟ ಮೇಲೆ ನಾವು ನದಿಯುಕೆ ಶುರು ಮಾಡಿದ್ವು.... ಸೋಮನಕಾಡು ದಾಟಿ ಇನ್ನೂ ಮೂರುನಾಕು ಕಿಲೋಮೀಟರ್ ಹೋದ್ರೆ ಅಲ್ಲಿ ಒಂದು ವ್ಯೂ ಪಾಯಿಂಟ್ ಅದೆ... ಅಲ್ಲಿವರೆಗೆ ನಡ್ಕೊಂಡು ಹೋಗಿ ಸಣ್ಣ ಸಣ್ಣ ಜಲಪಾತದ ಅಡಿಲಿ, ಮೋಡಗಳ ಮಧ್ಯೆ ನಿತ್ತುಕೊಂಡು ಬೇರೆ ಬೇರೆ ಪೋಸ್ ಕೊಟ್ಟು ಫೋಟೋ ತೆಕ್ಕೊಂಡು ಆಯ್ತು :) ಮತ್ತೆ ವಾಪಸ್ ಜೇನುಕಲ್ಲು ಮಾರ್ಗವಾಗಿ ಕೊಟ್ಟಿಗೆಹಾರದವರೆಗೆ ನಮ್ಮ "ದಂಡ"ಯಾತ್ರೆ :) ಮಳೆ ಜೋರಾಯ್ತು..... ತೆಕ್ಕೊಂಡು ಬಂದ ತಿಂಡಿ ಎಲ್ಲಾ ಖಾಲಿ ಆವುಕೆ ಶುರು ಆಯ್ತು.... ಆ ಗಾಳಿ ಮಳೆಗೆ ಸುಮಾರು 18 -20 ಕಿಲೋಮೀಟರ್ ನಡುದು ನಡುದು ಸಾಕಾಯ್ತು :)
ಹಳೇ ನೆನಪ್ಪುಗಳ ಮತ್ತೆ ಕೆದಕ್ಕಿಕೊಂಡು ಮೂರೂ ಜನ ಮನಸ್ಸು ಹಗುರ ಮಾಡಿಕೊಂಡೆವು :)
ಕಾಲೇಜ್ ಲಿ ಇರುವಾಗ ಸುಮಾರು ಸರ್ತಿ ಒಬ್ಬೊಬ್ಬನೇ ಟ್ರೆಕಿಂಗ್ ಬಂದಿತ್ತಿದ್ದೆ ಇಲ್ಲಿಗೆ.... ಬಿದಿರುತಳ ಹೇಳುವ ಒಂದು ಅಜ್ಞಾತ ಹಳ್ಳಿಗೂ ಹೋಗಿತ್ತಿದ್ದೆ :) ಮಳೆ, ಗಾಳಿ, ಚಳಿ ಮನಸ್ಸಿನ ಹಗುರ ಮಾಡಿತ್ತು :) ಮಲಯ ಮಾರುತ ಮುದ ಕೊಟ್ಟತ್ತು.....
ಕೊಟ್ಟಿಗೆಹಾರಂದ ಬಸ್ ಹತ್ತಿ ಹ್ಯಾಂಡ್ ಪೋಸ್ಟ್ ತಲುಪ್ಪಿ ನಡ್ಕೊಂಡು ಹಾಸ್ಟೆಲಿಗೆ ಬಂದು ಮತ್ತೊಂದು ಸರ್ತಿ ನೀರು ಕಾಸಿ ಮಿಂದೂ ಆಯ್ತು..... ಫ್ರೆಂಡ್ ಹರೀಶ ಬಾಡಿಗೆಗೆ ಇದ್ದ ಮನೆಗೆ ಹೋಗುವ ಹೇಳಿ ನಾವಿಬ್ರೂ ಹೊರಟ್ವು..... ಕ್ಯಾಂಟೀನ್ ರಾಜಣ್ಣನ ಹಳೆ ಮನೆಲಿ ಹರೀಶ ಬಾಡಿಗೆಗೆ ಇತ್ತಿದ್ದ ಮೊದಲು.... ರಾಜಣ್ಣನ ಅಮ್ಮ, ಹಣ್ಣು ಹಣ್ಣು ಮುದುಕಿ ಅಲ್ಲಿ ಇತ್ತು..... ಮೂರ್ಸಂಜೆಲಿ ನಮ್ಮ ಕಂಡು ಶುರುವಿಗೆ ಗುರ್ತ ಸಿಕ್ಕದ್ರೂ ಮತ್ತೆ ತುಂಬಾ ಖುಷಿಪಟ್ಟತ್ತು ಅಜ್ಜಿ.... ಒತ್ತಾಯ ಮಾಡಿ ರೊಟ್ಟಿ ಚಟ್ನಿ ತಿನ್ಸಿ ಚೆಂದಲ್ಲಿ ಮಾತಾಡಿತ್ತು..... ಆ ಪ್ರೀತಿ ನೋಡಿಯಾಗುವಾಗ ಮನಸ್ಸಿನ ಮೂಲೇಲಿ ನಾವು ಎಂತದೋ ಒಂದು ಕಳ್ಕೊಂಡಿದ್ದೇವೆ ಹೇಳುವ ಭಾವ :(
ರಾತ್ರಿ ಬಸ್ ಹತ್ತಿ ಮತ್ತೆ ಬೆಂದಕಾಳೂರಿಗೆ ವಾಪಸ್ :( ಮರುದಿನ ಮತ್ತೆ ಆಫೀಸ್ ಗೆ ಹೋಗ್ವೇಕಲ್ಲಾ ????







+copy.jpg)
+copy.jpg)
+copy.jpg)
+copy.jpg)
+copy.jpg)












