Sunday, June 15, 2008

ನಮಸ್ತೇ..

ತುಂಬಾ ದಿನಗಳ ನಂತರ ಮತ್ತೆ ಬ್ಲಾಗ್ ಬರೆಯಲು ಕುಳಿತಿದ್ದೇನೆ....

ಮನವೇಕೋ ಭಣ ಭಣ.. ಅದ್ಯಾಕೋ ಗೊತ್ತಿಲ್ಲ, ಒಂಥರಾ ಬೇಜಾರು... ನನ್ನ ಮೇಲೆ ನನಗೇ ಕೋಪ... ನಿರುತ್ಸಾಹ....

ಒಮ್ಮೊಮ್ಮೆ ಎಲ್ಲಿಲ್ಲದ ಸಂತೋಷ, ಉತ್ಸಾಹ, ಖುಷಿ... ಸ್ವಲ್ಪ ಹೊತ್ತು ಕಳೆದರೆ ಪ್ರಪಂಚವೇ ಮುಳುಗಿ ಹೋದ ಭಾವ... ಎರಡು ಶೃಂಗಗಳ ಮಧ್ಯೆ ತುಯ್ದಾಡುತ್ತಿದ್ದೇನೆ... ಈ ದ್ವಂದ್ವಗಳ ಬಂಧನದಿಂದ ಮನಸ್ಸು ಯಾಕೋ ತೀರಾ ಘಾಸಿ ಆಗಿದೆ !

ಯಾವುದೇ ಸ್ಥಿತಿ ಶಾಶ್ವತ ಅಲ್ಲ ಅನ್ನೋದು ನನಗೇ ಚೆನ್ನಾಗಿ ಗೊತ್ತು... ಆದರೆ, ಈ ರೀತಿಯ "ಬೈ ಪೋಲಾರ್ ಮೂಡ್" ಖಾಯಿಲೆ ಒಳ್ಳೆಯದಲ್ಲ....

ಇದೆಲ್ಲದಕ್ಕೂ ಒಂದು ಒಳ್ಳೆಯ ಕೌನ್ಸೆಲ್ಲಿಂಗ್ ಮಾಡಿಸಿಕೊಂಡರೆ ಸರಿ ಆಗುತ್ತದೆ.. ಆದರೆ ನನಗೆ ಅದೆಲ್ಲಕ್ಕಿಂತಲೂ ಹೆಚ್ಚಾಗಿ ಬೇಕಾದದ್ದು ನನ್ನ ಅಮ್ಮನ "ಸನ್ನಿಧಿ".....

ನನ್ನ ಅಮ್ಮನ ಮಡಿಲಲ್ಲಿ ತಲೆ ಇಟ್ಟು ಮಲಗಿದರೆ ಎಲ್ಲವೂ ಸರಿ ಹೋಗುತ್ತದೆ...

ನನ್ನ ಅಮ್ಮ , ಅಪ್ಪ, ಅಜ್ಜ, ಅಜ್ಜಿ, ಮನೆಯವರನ್ನು ಒಮ್ಮೆ ನೋಡಿದರೆ, ಒಂದಷ್ಟು ದಿನ ಅಲ್ಲಿ ನಾನಿದ್ದು ಬಂದರೆ ನನ್ನ ಈ ಮನ ಸ್ಥಿತಿ ಬದಲಾಗುತ್ತದೆ...

ಹುಂ... ಯಾಕೋ ಕುಯ್ತಾ ಇದ್ದಾನೆ ಅಂತ ಅನ್ನಿಸ್ತಾ ? ಮನಸ್ಸಿನಲ್ಲಿ ಇರೋದನ್ನು ಯಾರ ಹತ್ತಿರವಾದರೂ ಹಂಚಿಕೊಳ್ಳುವ ಅಂತ ಅನ್ನಿಸಿತು... ಹಾಗಾಗಿ ಇದನ್ನೆಲ್ಲಾ ಬರೆದೆ...

ಮತ್ತೊಮ್ಮೆ ಬ್ಲಾಗ್ ನ ಅಂಗಳಕ್ಕೆ ಬಂದಾಗ ಇಂಥಾ ಭಾವಗಳ್ಯಾವುವೂ ನನ್ನ ಮನದಲ್ಲಿ ಇರಲಾರವು.. ಇನ್ಯಾವುದೋ ಹೊಸತೊಂದು ಖುಷಿ ಅಥವಾ ದುಃಖ ಅಲ್ಲಿ ಕುಳಿತು ಕಾಯುತ್ತಾ ಇರುತ್ತದೆ... ಮನದ ಭಾವಗಳನ್ನು ಇದ್ದದ್ದು ಇದ್ದ ಹಾಗೆ ನಿಮ್ಮ ಮುಂದೆ ಇರಿಸುವುದೊಂದೇ ನನ್ನ ಕೆಲಸ... "ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ"

No comments: