Wednesday, June 4, 2008

"ಆಶಯ"

ಹಸಿರಾಗಬೇಕು ಮನ
ಬಿಸಿಯಾರಬೇಕು...
ಕಟ್ಟಿಟ್ಟ ಭಾವಗಳ
ಕಟ್ಟು ಒಡೆಯಲುಬೇಕು,
ಎದೆಯಾಳದಲಿ ಕುಳಿತ
ಸಿಟ್ಟು ಕಳೆಯಲು ಬೇಕು,

ಹಸಿರಾಗಬೇಕು ಮನ
ಬಿಸಿಯಾರಬೇಕು...

ಹೃದಯಕ್ಕೆ ಮೆತ್ತಿರುವ
ಕೊಳೆಯ ತೊಳೆಯಲುಬೇಕು,
ಕಣ್ಣೀರ ಗಂಗೆಯಲಿ
ಪಾಪ ಕಳೆಯಲುಬೇಕು,
ಹಸಿರಾಗಬೇಕು ಮನ
ಬಿಸಿಯಾರಬೇಕು...

1 comment:

ತೇಜಸ್ವಿನಿ ಹೆಗಡೆ said...

ಒಳ್ಳೆಯ ಆಶಯ. ಇಷ್ಟವಾಯಿತು ಕವನ. "ಮಾನಸ"ಕ್ಕೆ ಭೇಟಿ ನೀಡಿದ ತಮಗೆ ಧನ್ಯವಾದಗಳು.