Thursday, June 5, 2008

"ಇರುವುದೆಲ್ಲವ ಬಿಟ್ಟು ಇರದಿರದೆಡೆಗೆ ತುಡಿಯುವುದೇ ಜೀವನ" ಅನ್ನೋ ಕವಿ ವಾಣಿ ಎಷ್ಟು ಸತ್ಯ ಅಲ್ವಾ ?

"ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ" ಎಂಬ ಜಿ. ಎಸ್. ಎಸ್. ರ ಮಾತು ಈ ಸಂಬಂಧಗಳಿಗೂ ಅನ್ವಯಿಸುತ್ತದೆ ಅಂತ ನಂಗೆ ಅನ್ನಿಸುತ್ತದೆ... ನಮ್ಮ ಹತ್ತಿರವೇ ಇರುವ ನಮಗೋಸ್ಕರ ಎಂಥಾ ತ್ಯಾಗಕ್ಕೂ ಸಿದ್ಧರಾಗಿರುವ ನಮ್ಮ ಸ್ನೇಹಿತರನ್ನು ಬಿಟ್ಟು ನಾವು ಇನ್ಯಾರನ್ನೋ ನಮ್ಮ "ಆತ್ಮೀಯರು" ಎಂದುಕೊಂಡು ಭ್ರಮಿಸುತ್ತೇವೆ ! ನಮ್ಮ ನಿಜದ ಗೆಳೆಯರ ಮನಕ್ಕೆ ನೋವು ಕೊಟ್ಟು ಇನ್ಯಾರನ್ನೋ ಮೆಚ್ಚಿಸ ಹೊರಡುತ್ತೇವೆ.. ವಿಪರ್ಯಾಸ ಅಂದರೆ, we never repent for that !

ಹಾಂ.. ಇವನ್ಯಾವನೋ ದೊಡ್ಡ ವೇದಾಂತಿಯ ಹಾಗೆ ಭಾಷಣ ಹೊಡೀತಾ ಇದ್ದಾನೆ ಅಂತ ಅನ್ಕೋ ಬೇಡಿ... ಇದು ನನ್ನ ಸ್ವಂತ ಅನುಭವ.. ಇಂಥಾ ಅನೇಕ ಘಟನೆಗಳು ನಮ್ಮ ನಿಮ್ಮೆಲ್ಲರ ಬದುಕಲ್ಲೂ ಆಗಿ ಹೋಗಿರುತ್ತದೆ.. ನೀವೂ ಇಂಥದ್ಯಾವುದಾದರೂ ಅನುಭವ ಹೊಂದಿದ್ದರೆ ಮಾತ್ರ ನನ್ನ ಮಾತು ಸತ್ಯ ಅಂತ ಅನ್ನಿಸಬಹುದು.. ಏನಂತೀರಾ ?

1 comment:

ತೇಜಸ್ವಿನಿ ಹೆಗಡೆ said...

good collections of pics... keep updating ur blog plz.