Tuesday, March 31, 2009

ಚಿತ್ರ ವಿಚಿತ್ರ ಮನಸ್ಥಿತಿ ಇರುವಾಗ ಬ್ಲಾಗ್ ಬರೆಯಲು ಹೊರಟರೆ ಆಗುವ ಎಡವಟ್ಟು ಗಳೇ ಹೀಗೆ... ಏನನ್ನು ಬರೆಯಬೇಕು ಎಂಬ ಸ್ಪಷ್ಟ ಅರಿವಿಲ್ಲದೆ ಬರೆಯುವ ಬರಹಗಳು ತಲೆ ಬುದವಿಲ್ಲದೆ ಬಡಬಡಿಸುವ ಮಾತುಗಳಾಗುತ್ತವೆ... ಏನೇನೋ ಹುಚ್ಚು ವಾಕ್ಯಗಳನ್ನು ಪೋಣಿಸಿ ಹೊಡೆಯುವ ಭಾಷಣವಾಗುತ್ತದೆ..
ಮತ್ತದೇ ಗೋಳು.... ತುಂಬಾ ದಿನಗಳ ಜಡತ್ವ.. ಸೋಮಾರಿತನವೇ ಮೈವೆತ್ತ ಅಕ್ಷಯರಾಮ ಮತ್ತೆ ಕೀ ಬೋರ್ಡ್ ಎದುರು ಕುಳಿತಿದ್ದಾನೆ... ಏನೇನೋ ಬಾಯಿಗೆ ಬಂದಂತೆ, ಮನಸಿಗೆ ತೋಚಿದಂತೆ ಗೀಚುತ್ತಿದ್ದಾನೆ..... ಓದುವರಾರೋ ? ಓದಿ ಕಿವಿ ಹಿಂಡುವರಾರೋ ? ಸರಿ ದಾರಿಗೆ ಎಳೆಯುವರಾರೋ ? ದೇವರಿಗೇ ಗೊತ್ತು...

ನನ್ನ ಕವನ

ಮಧ್ಯ ರಾತ್ರಿಯಲೆನ್ನ
ಎದೆಯೊಳೆದ್ದಿಹ ಭಾವ
ಕವನವಾಗುವ ತವಕದಲ್ಲಿ
ಕುಣಿದು..
ಒಂದೆರಡು ಸಾಲುಗಳ
ಚುಟುಕ ರೂಪದಿ ಬಂದು
ಸರಿದು ಹೋಯಿತು ಒಡಲ
ಬೇಗೆ ತಣಿದು